Krushi Pumpset-ಕೃಷಿ ಪಂಪ್ ಸೆಟ್ ಹೊಂದಿರುವವರು ತಪ್ಪದೇ ಈ ಕೆಲಸವನ್ನು ಮಾಡುವುದು ಕಡ್ಡಾಯ!

Facebook
Twitter
Telegram
WhatsApp

ರಾಜ್ಯ ವಿದ್ಯುತ್ ಸರಬರಾಜು ಕಂಪನಿಯಿಂದ ಕೃಷಿ ಪಂಪ್ ಸೆಟ್(Krushi Pumpset) ಹೊಂದಿರುವ ರೈತರಿಗೆ ನೂತನ ಆದೇಶವನ್ನು ಹೊರಡಿಸಲಾಗಿದ್ದು, ಆದೇಶದ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಪ್ರಸ್ತುತ ರಾಜ್ಯದಲ್ಲಿ ಇಂಧನ ಇಲಾಖೆಯಿಂದ ರೈತರು ಉಪಯೋಗಿಸುವ ಕೃಷಿ ಪಂಪ್ ಸೆಟ್ ಗಳಿಗೆ ಪ್ರತಿ ತಿಂಗಳು ಬಳಕೆಯಾಗುವ ಒಟ್ಟು ವಿದ್ಯುತ್ ಗೆ ಸಹಾಯಧನವನ್ನು ನೀಡಲಾಗುತ್ತಿದೆ.

ಇದನ್ನೂ ಓದಿ: Indian Air Force Jobs-2024: ವಾಯುಪಡೆಯಲ್ಲಿ 12th ಪಾಸಾದವರಿಗೆ ಹಲವು ಹುದ್ದೆಗಳ ಅವಕಾಶ!

ಈ ಕ್ರಮದಿಂದ ರೈತರಿಗೆ ಕೃಷಿ ಪಂಪ್ ಸೆಟ್ ವಿದ್ಯುತ್ ಬಿಲ್ ಪಾವತಿಯ ಅರ್ಥಿಕವಾಗಿ ಹೊರೆ ತಪ್ಪುವುದರಿಂದ ಬೆಳೆಗಳನ್ನು ಬೆಳೆಯಲ್ಲು ತಗಲುವ ವೆಚ್ಚ ಕಡಿಮೆ ಮಾಡಿದಂತಾಗುತ್ತದೆ.

agriculture pumpset-ಕೃಷಿ ಪಂಪ್ ಸೆಟ್ ಹೊಂದಿರುವವರು ತಪ್ಪದೇ ಈ ಕೆಲಸವನ್ನು ಮಾಡುವುದು ಕಡ್ಡಾಯ:

ರಾಜ್ಯ ವಿದ್ಯುತ್ ಸರಬರಾಜು ಕಂಪನಿಗಳ ಪ್ರಕಟಣೆಯನ್ವಯ ಹೊಸದಾಗಿ ಕೃಷಿ ಜಮೀನನ್ನು ಖರೀದಿ ಮಾಡಿದವರು ಮತ್ತು ಮರಣ ಹೊಂದಿದವರ ಹೆಸರಿನಲ್ಲಿ RR ಸಂಖ್ಯೆಯನ್ನು ಹೊಂದಿರುವವರು ತಮ್ಮ ಹೆಸರಿಗೆ RR ಸಂಖ್ಯೆಯನ್ನು ಕಡ್ಡಾಯವಾಗಿ ಬದಲಾವಣೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Vidyarthi vethana-2024-25ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶ!

How to apply-RR ಸಂಖ್ಯೆಯ ಹೆಸರು ಬದಲಾವಣೆಗೆ ಎಲ್ಲಿ ಅರ್ಜಿ ಸಲ್ಲಿಸಬೇಕು?

ಗ್ರಾಹಕರು/ರೈತರು RR ಸಂಖ್ಯೆಯ ಹೆಸರು ಬದಲಾವಣೆಗೆ ನಿಮ್ಮ ಹಳ್ಳಿಯ ಲೈನ್ ಮ್ಯಾನ್ ಅವರವನ್ನು ನೇರವಾಗಿ ಭೇಟಿ ಮಾಡಿ ಅಗತ್ಯ ದಾಖಲಾತಿಗಳನ್ನು ಒದಗಿಸಿ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹೋಬಳಿ/ಹತ್ತಿರ ವಿದ್ಯುತ್ ಸರಬರಾಜು ಕಂಪನಿ(KEB) ಕಚೇರಿಯನ್ನು ಭೇಟಿ ಮಾಡಿ ಕೃಷಿ ಪಂಪ್ ಸೆಟ್ ನ RR ಸಂಖ್ಯೆ ಹೆಸರು ಬದಲಾವಣೆಗೆ ಅರ್ಜಿ ಸಲ್ಲಿಸಬಹುದು.

Documents for RR Number Name Change- ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು?

1) ಅರ್ಜಿದಾರರ ಆಧಾರ್ ಕಾರ್ಡ.
2) ಅರ್ಜಿದಾರರ ಪೋಟೋ.
3) RR ಸಂಖ್ಯೆ ವಿವರ.
4) ಮೊಬೈಲ್ ಸಂಖ್ಯೆ.
5) ಅರ್ಜಿ ನಮೂನೆ.

ಇದನ್ನೂ ಓದಿ: free vermicompost and dairy training- ಉಚಿತ ಡೈರಿ ಮತ್ತು ಎರೆಹುಳು ಗೊಬ್ಬರ ಉತ್ಪಾದನೆ ತರಬೇತಿಗೆ ಅರ್ಜಿ!

Why Change RR Number Name-ಏಕೆ RR ಸಂಖ್ಯೆ ಹೆಸರನ್ನು ಬದಲಾವಣೆ ಮಾಡಿಕೊಳ್ಳಬೇಕು?

1) ಅಕ್ರಮ ಪಂಪ್ ಸೆಟ್ ಗಳನ್ನು ಪತ್ತೆ ಹಚ್ಚಲು ಈ ಕ್ರಮ ಅನುಸರಿಸಲಾಗುತ್ತಿದೆ.

2) ನೈಜ ಫಲಾನುಭವಿಗಳಿಗೆಯೇ ಸಹಾಯಧನದಲ್ಲಿ ವಿದ್ಯುತ್  ನೀಡಲಾಗುತ್ತಿದಿಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು.

3) RR ಸಂಖ್ಯೆಗೆ ಆಧಾರ್ ಕಾರ್ಡ ಜೋಡಣೆ ಮಾಡಲು ಪ್ರಸ್ತುತ ಮಾಲೀಕರ ಹೆಸರಿಗೆ ಪಂಪ್ ಸೆಟ್ ಇರುವುದು ಕಡ್ಡಾಯವಾಗಿರುವುದರಿಂದ RR ಸಂಖ್ಯೆ ಹೆಸರು ಬದಲಾವಣೆ ಅಗತ್ಯವಾಗಿದೆ.

ಇದನ್ನೂ ಓದಿ: RVNL Recruitment 2024- ರೈಲು ವಿಕಾಸ ನಿಗಮದಲ್ಲಿ ವ್ಯವಸ್ಥಾಪಕ ಹುದ್ದೆಗಳ ಭರ್ತಿ!ವೇತನ 2 ಲಕ್ಷ ರೂ. ವರೆಗೆ ಸಂಬಳ!

Bescom district wise helpline numbers-ಬೆಸ್ಕಾಂ ವಾಟ್ಸಾಪ್ ಸಹಾಯವಾಣಿಗಳು:

ಬೆಂಗಳೂರು ಪೂರ್ವ(bengalore east): 8277884013, ಬೆಂಗಳೂರು ಪಶ್ಚಿಮ(bengalore west): 8277884012, ಬೆಂಗಳೂರು ದಕ್ಷಿಣ(bengalore south): 8277884011, ಬೆಂಗಳೂರು ಉತ್ತರ(bengalore North): 8277884014, ಕೋಲಾರ(Kolar): 8277884015, ಚಿಕ್ಕಬಳ್ಳಾಪುರ(Chikkaballapura): 8277884016, BRC: 8277884017, ದಾವಣಗೆರೆ(Davanagere): 8277884021, ಚಿತ್ರದುರ್ಗ(Chitradurga): 8277884020, ರಾಮನಗರ(Ramanagar): 8277884018, ತುಮಕೂರು(Tumkur): 8277884019

1) Energy Department-ಇಂಧನ ಇಲಾಖೆ ವೆಬ್ಸೈಟ್: Click here

2) Bescom-ಬೆಸ್ಕಾಂ: Click here

3) Mescom-ಮೆಸ್ಕಾಂ: Click here

4) Gescom-ಜೆಸ್ಕಾಂ: Cclick here

5) Hescom-ಹೆಸ್ಕಾಂ: Click here

Facebook
Twitter
Telegram
WhatsApp
Picture of siddesh

siddesh

Leave a Comment

Top Stories

land documents

agricultural land documents: ಜಮೀನನ್ನು ಖರೀದಿ ಮಾಡುವ ಮುನ್ನ ಯಾವೆಲ್ಲಾ ದಾಖಲೆಗಳನ್ನು ಚೆಕ್ ಮಾಡಬೇಕು?

ಕೃಷಿ ಭೂಮಿ ಖರೀದಿಸುವ ಮುಂಚೆ ಯಾವ ಯಾವ ದಾಖಲೆಗಳನ್ನು ಮುಖ್ಯವಾಗಿ ಚೆಕ್ ಮಾಡಬೇಕು ಮತ್ತು ಯಾವೆಲ್ಲ ಮಾಹಿತಿಯನ್ನು ಪರೀಶೀಲನೆ ಮಾಡಬೇಕು? ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ. ಒಂದೊಮ್ಮೆ ನೀವು ಖರೀದಿ ಮಾಡುತ್ತಿರುವ ಜಮೀನಿನ ದಾಖಲೆಗಳು

sarakri yojane

sarakri yojane- ಸಂಚಾರಿ ಮಾರಾಟ ಮಳಿಗೆ ಖರೀದಿಗೆ ರೂ 5.00 ಲಕ್ಷ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

ಡಾ ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತದಿಂದ ವಿವಿಧ ಯೋಜನೆಯಡಿ ಸಬ್ಸಿಡಿಯ ಪ್ರಯೋಜನ ಪಡೆದುಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 30-10-2024 ಕೊನೆಯ ದಿನಾಂಕವಾಗಿದೆ. ಕುಶಲಕಮಿಗಳ ಅಭಿವೃದ್ದಿಗೆ

Crop insurance

Rabi Crop Insurance-ಹಿಂಗಾರು ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಅರ್ಜಿ ಆಹ್ವಾನ!

ಪ್ರಸ್ತುತ ರಾಜ್ಯದಲ್ಲಿ ಮುಂಗಾರು ಹಂಗಾಮು ಮುಕ್ತಾಯವಾಗಿ ಹಿಂಗಾರು ಹಂಗಾಮು ಆರಂಭವಾಗುತ್ತಿದ್ದು ರೈತರು ತಮ್ಮ ಬೆಳೆಗಳಿಗೆ ವಿಮೆಯನ್ನು(Rabi Crop Insurance) ಮಾಡಿಸಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನಿಮ್ಮ ಹಳ್ಳಿ ವ್ಯಾಪ್ತಿಯಲ್ಲಿ ಯಾವೆಲ್ಲ ಬೆಳೆಗಳಿಗೆ ವಿಮೆಯನ್ನು ಮಾಡಿಸಬಹುದು? ಅರ್ಜಿ