Nano DAP: ನ್ಯಾನೋ ಡಿಎಪಿ ರಸಗೊಬ್ಬರ ಎಲ್ಲಿ ಖರೀದಿಸಬೇಕು? ಇದರ ಬಳಕೆಯ ಲಾಭಗಳೇನು? ಯಾವೆಲ್ಲ ಬೆಳೆಗೆ ಸಿಂಪರಣೆ ಮಾಡಬವುದು.

ಪಲಿಸರ ಸ್ನೇಹಿ, ಕಡಿಮೆ ವೆಚ್ಚ, ಸುಲಭ ನಿರ್ವಹಣೆಗಾಗಿ ದ್ರವರೂಪದ ರಸಗೊಬ್ಬರ 'ನ್ಯಾನೋ ಡಿಎಪಿ' ರೈತ ಸಮುದಾಯದ ಪರಿಶ್ರಮ ಮತ್ತು ಖರ್ಚನ್ನು ಮಿತಗೊಳಿಸುವ ನಿಟ್ಟಿನಲ್ಲಿ ಇಸ್ರೋ ಸಂಸ್ಥೆಯು ಪರಿಸರ-ಸ್ನೇಹಿ ದ್ರವರೂಪದ ನ್ಯಾನೋ ಡಿಎಪಿ ರಸಗೊಬ್ಬರವನ್ನು ಬಿಡುಗಡೆ ಮಾಡಿದೆ.

ನ್ಯಾನೋ ಡಿಎಪಿ ಬಳಕೆ ಪ್ರಯೋಜನೆಗಳು :

1. ಮೊಳಕೆಯೊಡೆಯುವಿಕೆಯ ಪ್ರಮಾಣ ಹೆಚ್ಚಳ.

2. ಬೇರುಗಳ ಬೆಳವಣಿಗೆಗೆ ಸಹಾಯಕ.

3. ಕೊಂಬೆಗಳು ಮತ್ತು ಹೂವುಗಳ ಸಂಖ್ಯೆಯ ಹೆಚ್ಚಳ.

4. ಅಧಿಕ ಇಳುವರಿಯೊಂದಿಗೆ ಉತ್ತಮ ಆದಾಯ.

5. ಬೇಸಾಯ ವೆಚ್ಚ ಕಡಿತ.

6. ಸಂಗ್ರಹಣೆ, ಸಾಗಾಟ ಮತ್ತು ಬಳಕೆ ಸುಲಭ.

7. ಪರಿಸರ ಸ್ನೇಹಿ - ವಿಷಕಾರಿಯಲ್ಲ.

8. ಗಿಡಗಳಿಗೆ ನೇರ ಸಿಂಪರಣೆ.

ಆರ್ಥಿಕವಾಗಿ ಲಾಭದಾಯಕ :

500 ಮಿ.ಲಿ. ನ್ಯಾನೋ ಡಿಎಪಿ ಬಾಟಲಿಯು 50 ಕೆ.ಜಿ. ಡಿಎಪಿ ರಸಗೊಬ್ಬರಕ್ಕೆ ಸಮ. ಒಂದು ರಸಗೊಬ್ಬರ ಚೀಲಕ್ಕೆ ರೂ. 1350/- ಆಗಿದೆ. ದ್ರವರೂಪದ ನ್ಯಾನೋ ಡಿಎಪಿ ರಸಗೊಬ್ಬರದ ದರ 500 20. d. 600/- JUDE 500 ಮಿ.ಲೀ ಬಾಟಲಿ ಒಂದರ ದರ ರೂ. 600/- ಮಾತ್ರ ಇತರೇ ಯಾವುದೇ ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಾಗಿಲ್ಲ.

ರೈತರು ಎಲ್ಲಿ ಖರೀದಿಸಬವುದು:

ನಿಮ್ಮ ಹತ್ತಿರದ ವ್ಯವಸಾಯ ಸೇವ ಸಹಕಾರ ಸಂಘದ(ಸೊಸೈಟಿ/VSS) ಕಚೇರಿಯಲ್ಲಿ ಖರೀದಿಸಬವುದು ಅಥವಾ ನೇರವಾಗಿ https://www.iffcobazar.in ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅನ್ಲೈನ್ ನಲ್ಲಿ ಅರ್ಡರ್ ಮಾಡಿ ತರಿಸಿಕೊಳ್ಳಬವುದು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಮಾನ್ಯ ಸೇವಾ ಕೇಂದ್ರದಲ್ಲಿಯು (CSC) ಲಭ್ಯ : ದ್ರವರೂಪದ ನ್ಯಾನೋ ಡಿಎಪಿ ಗೊಬ್ಬರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮ ಮಟ್ಟದಲ್ಲಿ ನಡೆಸಲ್ಪಡುತ್ತಿರುವ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ (CSC) ಮಾರಾಟಕ್ಕೆ ಲಭ್ಯವಿರುತ್ತದೆ. ಆಸಕ್ತ ರೈತರು ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರದ ಗ್ರಾಮ ಮಟ್ಟದ ಪ್ರತಿನಿಧಿಗಳನ್ನು (VLE) ಭೇಟಿ ಮಾಡಿ ಮುಂಗಡ ಬೇಡಿಕೆಯನ್ನು ನೀಡಿ ಪಡೆಯಬವುದು.

ಇದನ್ನೂ ಓದಿ: ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಿಗೆ ಯಾರೆಲ್ಲ ಅರ್ಹರು? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್.

ಯಾವೆಲ್ಲ ಬೆಳೆಗಳಿಗೆ ಹೇಗೆ ಬಳಕೆ ಮಾಡಬವುದು:

ಭತ್ತದ ಬೀಜೋಪಚಾರ: ಭತ್ತ ಬಿತ್ತನೆ ಮಾಡುವ ಮೊದಲು ನ್ಯಾನೋ ಡಿಎಪಿಯನ್ನು 3-5 ಎಮ್ ಎಲ್ ಪ್ರತಿ ಕೆಜಿ ಭತ್ತಕ್ಕೆ ಹಾಕಿ 20-30 ನಿಮಿಷ ನೆರಳಿನಲ್ಲಿ ಒಣಗಿಸಿ ನಂತರ ಬಿತ್ತನೆ ಮಾಡಬೇಕು.

ಭತ್ತದ ಸಸಿಗೆ: ಭತ್ತದ ಸಸಿಯನ್ನು ನಾಟಿ ಮಾಡುವ ಮೊದಲು ನ್ಯಾನೋ ಡಿಎಪಿಯನ್ನು 3-5 ಎಮ್ ಎಲ್ ಪ್ರತಿ ಲೀಟರ್ ನೀರಿಗೆ ಹಾಕಿ ಸಸಿ ಬೇರುಗಳನ್ನು ನೆನಸಿ 20-30 ನಿಮಿಷ ನೆರಳಿನಲ್ಲಿ ಒಣಗಿಸಿ ನಂತರ ನಾಟಿ ಮಾಡಬೇಕು.

ಬೆಳೆಗಳಿಗೆ ಸಿಂಪರಣೆ: 2-4 ಎಮ್ ಎಲ್ ನ್ಯಾನೋ ಡಿಎಪಿಯನ್ನು ಪ್ರತಿ ಲೀಟರ್ ನೀರಿಗೆ ಬೇರಸಿ ಹೂವಾಡುವ ಹಂತಕ್ಕಿಂತ ಮೊದಲು ಮತ್ತು ಕವಲು ಹೊಡೆದ ಸಮಯದಲ್ಲಿ ಬೆಳೆಗಳಿಗೆ ಸಿಂಪರಣೆ ಮಾಡಬವುದು.

ಬೀಜೋಪಚಾರ ಮತ್ತು ಸಿಂಪರಣೆ ಹಂತಗಳು:

ಗೋಧಿ, ಮೆಕ್ಕೆಜೋಳ, ಸಿರಿಧಾನ್ಯ, ಭತ್ತ ಬೆಳೆಗಳಿಗೆ ಬೀಜೋಪಚಾರಕ್ಕೆ- 3-5 ml/kg ಸಿಂಪರಣೆ- 30-35 ದಿನದ ಬೆಳೆಗೆ 2-4 ml ಪ್ರತಿ ಲೀಟರ್ ನೀರಿಗೆ.

ದ್ವಿದಳ ದಾನ್ಯ ಬೆಳೆಗಳಿಗೆ: ಬೀಜೋಪಚಾರಕ್ಕೆ- 3-5 ml/kg ಸಿಂಪರಣೆ- 30-35 ದಿನದ ಬೆಳೆಗೆ 2-4 ml ಪ್ರತಿ ಲೀಟರ್ ನೀರಿಗೆ.

ಕಬ್ಬು: ಬೀಜೋಪಚಾರಕ್ಕೆ- 3-5 ml/kg ಸಿಂಪರಣೆ- 40-60 ದಿನದ ಬೆಳೆಗೆ 2-4 ml ಪ್ರತಿ ಲೀಟರ್ ನೀರಿಗೆ.

ತರಕಾರಿ ಬೆಳೆಗಳಿಗೆ: ಬೀಜೋಪಚಾರಕ್ಕೆ- 3-5 ml/kg ಸಿಂಪರಣೆ- 30-35 ದಿನದ ಬೆಳೆಗೆ 2-4 ml ಪ್ರತಿ ಲೀಟರ್ ನೀರಿಗೆ.

ಹತ್ತಿ: ಬೀಜೋಪಚಾರಕ್ಕೆ- 3-5 ml/kg ಸಿಂಪರಣೆ- 30-35 ದಿನದ ಬೆಳೆಗೆ 2-4 ml ಪ್ರತಿ ಲೀಟರ್ ನೀರಿಗೆ.

ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಜಾಲತಾಣಕ್ಕೆ ಭೇಟಿ ನೀಡಿ:

https://nanodap.in/ka