Dam water level in karnataka: ರಾಜ್ಯದ ಯಾವ ಯಾವ ಡ್ಯಾಂ ಎಷ್ಟು? ನೀರು ಭರ್ತಿಯಾಗಿದೆ ಇಲ್ಲಿದೆ ಸಂಪೂರ್ಣ ವಿವರ!

Facebook
Twitter
Telegram
WhatsApp

ಕಳೆದ ಎರಡು-ಮೂರು ವಾರದಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗಿರುವ ಪರಿಣಾಮ ಬಹುತೇಕ ರಾಜ್ಯದ ಅಣೆಕಟ್ಟುಗಳು ಭರ್ತಿಯಾಗುವ ಮಟ್ಟ(Dam water level in karnataka-2024) ತಲುಪಿದ್ದು ಈ ಲೇಖನದಲ್ಲಿ ಪ್ರಸ್ತುತ ಯಾವ ಡ್ಯಾಂ ಗೆ ಎಷ್ಟು ಪ್ರಮಾಣದ ನೀರು ಸಂಗ್ರಹವಾಗಿದೆ ಇತರೆ ಮಾಹಿತಿಯನ್ನು ತಿಳಿಸಲಾಗಿದೆ.

ಈ ಮಾಹಿತಿಯು ಉಪಯುಕ್ತ ಅನಿಸಿದ್ದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ, ಕರ್ನಾಟಕ ಮಳೆ ಪ್ರಮಾಣ ನಕ್ಷೆಯ ಮಾಹಿತಿಯ ಪ್ರಕಾರ ಕಳೆದ 24 ಗಂಟೆಗಳಲ್ಲಿ ರಾಜ್ಯದ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಕೊಡ್ಕಣಿಯಲ್ಲಿ ಅತ್ಯಧಿಕ 111 ಮಿಲಿ ಮೀಟರ್ ಮಳೆ ದಾಖಲಾಗಿರುತ್ತದೆ.

ಉಳಿದಂತೆ ಕರಾವಳಿ ಜಿಲ್ಲೆಗಳಾದ ಉತ್ತರಕನ್ನಡ, ದಕ್ಷಿಣಕನ್ನಡ, ಉಡುಪಿಯಲ್ಲಿ ಉತ್ತಮ ಮಳೆಯಾಗಿದ್ದು ಬೀದರ್, ಕಲಬುರ್ಗಿ ಸೇರಿದಂತೆ ದಕ್ಷಿಣ ಕರ್ನಾಟಕ ಜಿಲ್ಲೆಗಳಲ್ಲಿ ಮಧ್ಯಮದಿಂದ ಸಾಧಾರಣ ಮಳೆಯಾಗಿರುತ್ತದೆ.

ಇದನ್ನೂ ಓದಿ: LIC jobs-2024: ಎಲ್ಐಸಿಯಿಂದ 200 ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿ!

male mahiti-ಮಳೆ ಮುನ್ಸೂಚನೆ:

ಭಾರತೀಯ ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಮುಂದಿನ 5 ದಿನಗಳವರೆಗೆ ಕರಾವಳಿ ಜಿಲ್ಲೆಗಳಲ್ಲಿ ಅಧಿಕ ಮಳೆಯಾಗುವ ಸಾಧ್ಯತೆಯಿದ್ದು ಇಂದು(28-07-2024) ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದ್ದು,

ಜುಲೈ 29, 30 ರಂದು ಸಹ ಆರೆಂಜ್ ಅಲರ್ಟ್ ನೀಡಲಾಗಿದ್ದು ಇನ್ನುಳಿದ ದಿನಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಇನ್ನುಳಿದ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಇಂದು(28-07-2024)  ಭಾರಿ ಮಳೆ ಮುನ್ಸೂಚನೆ ನೀಡಲಾಗಿದ್ದು, ಜುಲೈ 29, 30 ಹಾಗೂ 1 ಆಗಸ್ಟ್ ರಂದು ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: Vasati Yojane application-2024: ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಯೋಜನೆಯಡಿ ಫಲಾನುಭವಿಗಳಿಗೆ ನೆರವು!

Dam water level in karnataka: ರಾಜ್ಯದ ಯಾವ ಯಾವ ಡ್ಯಾಂ ಎಷ್ಟು? ನೀರು ಭರ್ತಿಯಾಗಿದೆ ಇಲ್ಲಿದೆ ಸಂಪೂರ್ಣ ವಿವರ!

Karnataka Dam list-ರಾಜ್ಯದ ಪ್ರಮುಖ ಜಲಾಶಯಗಳ ಪಟ್ಟಿ ಹೀಗಿದೆ:

1) ಕೆ.ಆರ್.ಎಸ್
2) ಕಬಿನಿ
3) ಹೇಮಾವತಿ
4) ಹಾರಂಗಿ
5) ತುಂಗಭದ್ರಾ
6) ಲಿಂಗನಮಕ್ಕಿ
7) ಭದ್ರಾ
8) ಮಲಪ್ರಭಾ
9) ಮಾಣಿ
10) ಆಲಮಟ್ಟಿ
11) ಕದ್ರಾ
12) ಸೂಪಾ

ಇದನ್ನೂ ಓದಿ: PM Usha Scholarship 2024: PUC ಪಾಸಾದವರಿಗೆ ಕೇಂದ್ರದಿಂದ 20 ಸಾವಿರ ವಿದ್ಯಾರ್ಥಿವೇತನ!

Dam water level-2024: ದಿನಾಂಕ: 27 ಜುಲೈ 2024ಗೆ ಒಟ್ಟು ನೀರಿನ ಮಟ್ಟ:

1) ಕೆ.ಆರ್.ಎಸ್- 124 ಅಡಿ(124)
2) ಕಬಿನಿ- 2282 ಅಡಿ(2284)
3) ಹೇಮಾವತಿ- 2920 ಅಡಿ(2922)
4) ಹಾರಂಗಿ- 2854 ಅಡಿ(2859)
5) ತುಂಗಭದ್ರಾ- 1631 ಅಡಿ91633)
6) ಲಿಂಗನಮಕ್ಕಿ- 1807 ಅಡಿ(1819)
7) ಭದ್ರಾ- 178 ಅಡಿ(186)
8) ಮಲಪ್ರಭಾ- 2071 ಅಡಿ(2079)
9) ಮಾಣಿ- 584 ಮೀಟರ್(594)
10) ಆಲಮಟ್ಟಿ- 516 ಮೀಟರ್(519)
11) ಕದ್ರಾ- 29 ಮೀಟರ್(34)
12) ಸೂಪಾ- 548 ಮೀಟರ್(564)

ಇದನ್ನೂ ಓದಿ: Parihara amount-2024: ಮಳೆಯಿಂದ ಉಂಟಾದ ನಷ್ಟಕ್ಕೆ ರಾಜ್ಯ ಸರಕಾರದಿಂದ 775 ಕೋಟಿ ಅನುದಾನ!ಯಾರಿಗೆಲ್ಲ ಸಿಗಲಿದೆ ಪರಿಹಾರದ ಹಣ!

(ಬ್ರಕೇಟ್ ನಲ್ಲಿ ನಮೂದಿಸಿರುವುದು ಜಲಾಶಯ ಭರ್ತಿಯಾಗಲು ಇರುವ ಪೂರ್ಣ ನೀರಿನ ಮಟ್ಟದ ಮಾಹಿತಿ)

ಮೇಲಿನ ಮಾಹಿತಿಯನ್ವಯ ಕೆ.ಆರ್.ಎಸ್, ಕಬಿನಿ, ಹೇಮಾವತಿ ಜಲಾಶಯಗಲು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದ್ದು ಉಳಿದ ಡ್ಯಾಂ ಗಳು ಬಹುತೇಕ ಭರ್ತಿಯಾಗುವ ಹಂತ ತಲುಪಿವೆ.

Karnataka Dam water inflow and out flows-ದಿನಾಂಕ: 27 ಜುಲೈ 2024ಕ್ಕೆ ಜಲಾಶಯಗಳ ಒಳ/ಹೊರ ಹರಿವು ಮಾಹಿತಿ ಹೀಗಿದೆ(ಕ್ಯುಸೆಕ್ ನಲ್ಲಿ):

  • ಲಿಂಗನಮಕ್ಕಿ: ಒಳ ಹರಿವು- 37,733 ಹೊರ ಹರಿವು- 3,525
  • ಸೂಪ: ಒಳ ಹರಿವು- 35,294  ಹೊರ ಹರಿವು- 0
  • ವರಾಹಿ: ಒಳ ಹರಿವು- 1,800  ಹೊರ ಹರಿವು- 0
  • ಹಾರಂಗಿ: ಒಳ ಹರಿವು- 10,569  ಹೊರ ಹರಿವು- 10,341
  • ಹೇಮಾವತಿ: ಒಳ ಹರಿವು- 51,998 ಹೊರ ಹರಿವು- 37,977
  • ಕೃಷ್ಣ ರಾಜಸಾಗರ(KRS): ಒಳ ಹರಿವು- 1,17,066 ಹೊರ ಹರಿವು- 1,30,867
  • ಕಬಿನಿ: ಒಳ ಹರಿವು- 32,867  ಹೊರ ಹರಿವು- 35,000
  • ಭದ್ರಾ: ಒಳ ಹರಿವು- 35,557  ಹೊರ ಹರಿವು- 210
  • ತುಂಗಾ ಭದ್ರ: ಒಳ ಹರಿವು- 1,24,361  ಹೊರ ಹರಿವು- 1,51,035
  • ಘಟಪ್ರಭ: ಒಳ ಹರಿವು- 50,337  ಹೊರ ಹರಿವು- 50,337
  • ಮಲಪ್ರಭ: ಒಳ ಹರಿವು- 28,972  ಹೊರ ಹರಿವು- 1,594
  • ಆಲಮಟ್ಟಿ: ಒಳ ಹರಿವು- 2,54,829  ಹೊರ ಹರಿವು- 3,26,786
  • ನಾರಾಯಣಪುರ: ಒಳ ಹರಿವು- 3,01,033 ಹೊರ ಹರಿವು- 3,09,368
  • ವಾಣಿವಿಲಾಸ ಸಾಗರ: ಒಳ ಹರಿವು- 0  ಹೊರ ಹರಿವು- 147

ಇದನ್ನೂ ಓದಿ: Krishi mela dharwad-2024: ಧಾರವಾಡ ಕೃಷಿ ಮೇಳಕ್ಕೆ ದಿನಾಂಕ ನಿಗದಿ! ಇಲ್ಲಿದೆ ಮೇಳದ ಸಂಪೂರ್ಣ ಮಾಹಿತಿ!

Dam total storage-ದಿನಾಂಕ: 27 ಜುಲೈ 2024ಕ್ಕೆ ಒಟ್ಟು ನೀರಿನ ಸಂಗ್ರಹಣೆ(ಟಿ.ಎಂ.ಸಿ/TMC ಅಲ್ಲಿ)

ಲಿಂಗನಮಕ್ಕಿ- 117.55 (151.75)
ಸೂಪ- 91.67 (145.33)
ವರಾಹಿ- 15.74 (31.10)
ಹಾರಂಗಿ- 7.16 (8.5)
ಹೇಮಾವತಿ- 35.22 (37.10)
ಕೃಷ್ಣ ರಾಜಸಾಗರ(KRS)- 47.43 (49.45)
ಕಬಿನಿ- 18.27 (19.52)
ಭದ್ರಾ- 64.88 (71.54)
ತುಂಗಾ ಭದ್ರ- 98.22 (105.79)
ಘಟಪ್ರಭ- 47.22 (51)
ಮಲಪ್ರಭ- 29.49 (37.73)
ಆಲಮಟ್ಟಿ- 71.71 (123)
ನಾರಾಯಣಪುರ- 24.94 (33.31)
ವಾಣಿವಿಲಾಸ ಸಾಗರ- 17.87 (30.42)

(ಬ್ರಕೇಟ್ ನಲ್ಲಿ ನಮೂದಿಸಿರುವುದು ಜಲಾಶಯ ಭರ್ತಿಯಾಗಲು ಇರುವ ಒಟ್ಟು ನೀರಿನ ಸಂಗ್ರಹಣೆ(ಟಿ.ಎಂ.ಸಿ/TMC ಅಲ್ಲಿ))

Facebook
Twitter
Telegram
WhatsApp
Picture of siddesh

siddesh

Leave a Comment

Top Stories

land documents

agricultural land documents: ಜಮೀನನ್ನು ಖರೀದಿ ಮಾಡುವ ಮುನ್ನ ಯಾವೆಲ್ಲಾ ದಾಖಲೆಗಳನ್ನು ಚೆಕ್ ಮಾಡಬೇಕು?

ಕೃಷಿ ಭೂಮಿ ಖರೀದಿಸುವ ಮುಂಚೆ ಯಾವ ಯಾವ ದಾಖಲೆಗಳನ್ನು ಮುಖ್ಯವಾಗಿ ಚೆಕ್ ಮಾಡಬೇಕು ಮತ್ತು ಯಾವೆಲ್ಲ ಮಾಹಿತಿಯನ್ನು ಪರೀಶೀಲನೆ ಮಾಡಬೇಕು? ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ. ಒಂದೊಮ್ಮೆ ನೀವು ಖರೀದಿ ಮಾಡುತ್ತಿರುವ ಜಮೀನಿನ ದಾಖಲೆಗಳು

sarakri yojane

sarakri yojane- ಸಂಚಾರಿ ಮಾರಾಟ ಮಳಿಗೆ ಖರೀದಿಗೆ ರೂ 5.00 ಲಕ್ಷ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

ಡಾ ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತದಿಂದ ವಿವಿಧ ಯೋಜನೆಯಡಿ ಸಬ್ಸಿಡಿಯ ಪ್ರಯೋಜನ ಪಡೆದುಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 30-10-2024 ಕೊನೆಯ ದಿನಾಂಕವಾಗಿದೆ. ಕುಶಲಕಮಿಗಳ ಅಭಿವೃದ್ದಿಗೆ

Crop insurance

Rabi Crop Insurance-ಹಿಂಗಾರು ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಅರ್ಜಿ ಆಹ್ವಾನ!

ಪ್ರಸ್ತುತ ರಾಜ್ಯದಲ್ಲಿ ಮುಂಗಾರು ಹಂಗಾಮು ಮುಕ್ತಾಯವಾಗಿ ಹಿಂಗಾರು ಹಂಗಾಮು ಆರಂಭವಾಗುತ್ತಿದ್ದು ರೈತರು ತಮ್ಮ ಬೆಳೆಗಳಿಗೆ ವಿಮೆಯನ್ನು(Rabi Crop Insurance) ಮಾಡಿಸಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನಿಮ್ಮ ಹಳ್ಳಿ ವ್ಯಾಪ್ತಿಯಲ್ಲಿ ಯಾವೆಲ್ಲ ಬೆಳೆಗಳಿಗೆ ವಿಮೆಯನ್ನು ಮಾಡಿಸಬಹುದು? ಅರ್ಜಿ